Hanuman Chalisa in Kannada – ಹನುಮಾನ್ ಚಾಲೀಸಾ

Hanuman Chalisa in kannada : ಹನುಮಾನ್ ಚಾಲೀಸಾ ತುಳಸೀದಾಸ ಅವರಿಂದ ಹಿಂದಿ ಭಾಷೆಯಲ್ಲಿ ರಚಿತವಾದದ್ದು. ಹನುಮಂತನ ಮೇಲೆ ನಲವತ್ತು ಶ್ಲೋಕಗಳು ಒಂದು ಭಕ್ತಿ ಗೀತೆ. ಹನುಮಾನ್ ಬ್ರಹ್ಮಚಾರಿ ದೇವರು, ಮತ್ತು ಶ್ರೀ ಹನುಮಾನ್ ನ ಆಶೀರ್ವಾದವನ್ನು ಪಡೆಯಲು ಕೋಟಿ ಜನರು ಚಾಲೀಸಾವನ್ನು ಪಠಿಸುತ್ತಾರೆ.

Lyrics of Hanuman Chalisa in Kannada

ಹನುಮಾನ್ ಚಾಲೀಸಾದ ೪೦ ಪದ್ಯಗಳಲ್ಲಿ ಪ್ರತೀ ಪದ್ಯವೂ ಒಂದೊಂದು ಆಶೀರ್ವಾದವನ್ನು ನೀಡುತ್ತದೆ.

ಹನುಮಾನ್ ಚಾಲೀಸಾ lyrics in kannada, hanuman chalisa in kannada lyrics, hanuman chalisa in kannada with meaning

ದೋಹಾ

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ.

(ಶ್ರೀ ಗುರುವಿನ ಪಾದ ಕಮಲಗಳ ಧೂಳಿನಿಂದ ನನ್ನ ಮನಸ್ಸೇ೦ಬಕನ್ನಡಿಯನ್ನು ಬೆಳಗಿ,ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ವಿಮಲ ಚರಿತ್ರೆಯನ್ನು ವರ್ಣಿಸುವೆನು)

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ .

(ಪವನಕುಮಾರನೇ ನನ್ನನ್ನು ಬುದ್ದಿಹೀನನೆಂದು ತಿಳಿದು ನನಗೆ ಬಲ ಬುದ್ದಿ ವಿದ್ಯೆಗಳನ್ನು ನೀಡಿ ನನ್ನಲಿರುವ ದೋಷಗಳನ್ನು ಕಷ್ಟಗಳನ್ನು ಪರಿಹರಿಸು)

ಧ್ಯಾನಮ್

ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ |
ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ‖
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ |
ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ‖

ಚೌಪಾಈ

ಜಯ ಹನುಮಾನ ಜ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ |1|

(ಜ್ಞಾನ ಗುಣಸಾಗರನಾದ ಹನುಮಂತನೇ ನಿನಗೆ ಜಯವಾಗಲಿ ಮೂರೂ ಲೋಕಗಳನ್ನು ಜ್ಞಾನದಿಂದ ಬೆಳಗುವ ನಿನಗೆ ಜಯವಾಗಲಿ )

ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ |2|

( ರಾಮದೂತನೇ ಅಪರಿಮಿತ ಬಲವುಳ್ಳವನೇ ಅಂಜನಿ ದೇವಿಯ ಪುತ್ರನೆ ಪಾವನಸುತನೇ )

ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ |3|

(ಮಹಾವೀರನೇ ,ವಿಕ್ರಮನೇ ,ವಜ್ರಾ೦ಗನೆ, ನೀನು ದುರ್ಬುದ್ಧಿಯನ್ನು ಹೋಗಲಾಡಿಸಿ, ಸುಬುದ್ಧಿಯನ್ನು ಕೊಡುವವನು )

ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ |4|

(ನೀನು ಚಿನ್ನದಂತಹ ಮೈಬಣ್ಣವುಳ್ಳವನು,ನಿನ್ನ ಕಿವಿಯಲ್ಲಿ ಕುಂಡಲಗಳು,ನಿನ್ನದು ಗುಂಗುರು ಕೂದಲು, ಉತ್ತಮ ವೇಷ ಧರಿಸಿ ಶೋಭಿಸುತ್ತಿರುವೆ)

ಹಾಥವಜ್ರ ಔ ಧ್ವಜಾ ವಿರಾಜೈ |
ಕಾಂಥೇ ಮೂಂಜ ಜನೇವೂ ಸಾಜೈ |5|

(ನಿನ್ನ ಕೈಯೆಯಲ್ಲಿ ವಜ್ರಾಯುಧ ಮತ್ತು ಧ್ವಜವು ರಾರಾಜಿಸುತ್ತಿದೆ. ಹೆಗಲಿನಿಂದ ಕೆಳಗೆ ಮುಂಜಿ ಹಾಗು ಜನಿವಾರಗಳಿವೆ)

ಶಂಕರ ಸುವನ ಕೇಸರೀ ನಂದನ |
ತೇಜ ಪ್ರತಾಪ ಮಹಾಜಗ ವಂದನ |6|

( ನೀನು ರುದ್ರಂಶ ಸಂಭೂತ ಹಾಗೂ ವಾನರರಸ ಕೇಸರಿಯ ಮಗನು,ತೇಜೋವಂತನಾಗಿ ಪ್ರತಾಪಿಯಾಗಿ ಇಡೀ ಜಗತ್ತಿನಿಂದ ವಂದ್ಯನು )

ವಿದ್ಯಾವಾನ ಗುಣೀ ಅತಿ ಚಾತುರ |
ರಾಮ ಕಾಜ ಕರಿವೇ ಕೋ ಆತುರ |7|

(ನೀನು ಗುಣವಂತನು,ವಿದ್ಯಾವಂತನು ಅತ್ಯಂತ ಚತುರನೂ,ರಾಮ ಕಾರ್ಯವನ್ನು ಮಾಡಿ ಮುಗಿಸಲು ಸದಾ ಆತುರ ಪಡುವವವನು )

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ |8|

(ಶ್ರೀರಾಮಚಂದ್ರನ ಚರಿತೆಯನ್ನು ಆಲಿಸುವುದರಲ್ಲಿ ನಿನಗೆ ಆನಂದ. ಶ್ರೀರಾಮ, ಲಕ್ಷ್ಮಣ, ಸೀತೆ ನಿನ್ನ ಮನಸಿನಲ್ಲಿ ನೆಲೆಸಿ ಬಿಟ್ಟಿದ್ದಾರೆ )

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
ವಿಕಟ ರೂಪಧರಿ ಲಂಕ ಜರಾವಾ |9|

(ನೀನು ಸೂಕ್ಷ್ಮ ರೂಪ ಧರಿಸಿಕೊಂಡು ಸಿಟಿಗೆ ಕಾಣಿಸಿಕೊಂಡೆ ಅದೇ ಭಯಂಕರ ರೂಪವನ್ನು ಧಾರಣ ಮಾಡಿಕೊಂಡು ಲಂಕೆಯನ್ನು ಸುಟ್ಟೆ )

ಭೀಮ ರೂಪಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ|10|

(ನೀನು ಬೃಹದಾಕಾರ ಧರಿಸಿ ಅಸುರನನ್ನು ಸಂಹರಿಸಿದೆ, ಶ್ರೀರಾಮ ಚಂದ್ರನ ಕಾರ್ಯವನ್ನು ಸಾಂಗಗೊಳಿಸಿದೆ )

ಲಾಯ ಸಂಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರಲಾಯೇ |11|

(ಸಂಜೀವಿನಿಯನ್ನು ತಂದು ಲಕ್ಷ್ಮನನ್ನೂ ಬದುಕಿಸಿಕೊಂಡೆ. ಶ್ರೀ ರಘುನಾಥನು ಸಂತಸದಿಂದ ನಿನ್ನನು ಆಲಂಗಿಸಿಕೊಂಡನು )

ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ |12|

(ನೀನು ನನ್ನ ಸೋದರ ಭಾರತನಷ್ಟೇ ನನಗೆ ಪ್ರಿಯನು ಎಂದು ಶ್ರೀ ರಾಮಚಂದ್ರನು ನಿನ್ನನ್ನು ಬಹುವಾಗಿ ಹೊಗಳಿದ್ದಾನೆ)

ಸಹಸ ವದನ ತುಮ್ಹರೋ ಯಶಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ |13|

(ಆದಿಶೇಷನು ಸಹಸ್ರ ಮುಖಗಳಿಂದ ನಿನ್ನ ಕೀರ್ತಿಯನ್ನು ಹಾದಿ ಹೊಗಳುತ್ತಾನೆ ಎನ್ನುತ್ತಾ ಶ್ರೀಪತಿಯ ನಿನ್ನನ್ನು ಆಲಂಗಿಸಿಕೊಳ್ಳುತ್ತಾನೆ )

ಸನಕಾದಿಕ ಬ್ರಹ್ಮಾದಿ ಮುನೀಶಾ |
ನಾರದ ಶಾರದ ಸಹಿತ ಅಹೀಶಾ |14|

(ಸನಕಾದಿ ಋಷಿವರ್ಯರು,ಬ್ರಹ್ಮಾದಿಗಳು,ನಾರದರು,ಸರಸ್ವತಿಯೂ ಆದಿಶೇಷನು)

ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ |15|

(ಯಮನು ಕುಬೇರನು ದಿಕ್ಪಾಲಕರು ಕವಿಕೋವಿದರು ನಿನ್ನ ಮಹಿಮೆಯನ್ನು ಎಷ್ಟೊಂದು ವರ್ಣಿಸಿಯರು )

ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜಪದ ದೀನ್ಹಾ |16|

(ನೀನು ಸುಗ್ರೀವನಿಗೆ ಉಪಕಾರವನ್ನು ಮಾಡಿದೆ.ರಾಮನ ಸಖ್ಯ ಮಾಡಿಸಿ ಅವನಿಗೆ ರಾಜ್ಯ ಪದವಿ ಸಿಗುವಂತೆ ಮಾಡಿದೆ.)

ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯೇ ಸಬ ಜಗ ಜಾನಾ|17|

(ನೀನು ಕೊಟ್ಟ ಸಲಹೆಯನ್ನು ವಿಭೀಷಣನು ಪಾಲಿಸಿದನು.ಆದರಿಂದಲೇ ಅವನು ಲಂಕಾಧಿಪತಿಯಾದನೆಂಬುದನ್ನು ಇಡೀ ಜಗತ್ತೇ ಬಲ್ಲದು)

ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ |18|

(ಎರಡು ಸಹಸ್ರ ಯೋಜನೆ ದೂರವಿದ್ದ ಸೂರ್ಯವನ್ನು ಮಧುರ ಫಲವೆಂದು ತಿಳಿದು ಅವನೆಡೆಗೆ ಹಾರಿದೆ)

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ |19|

(ಶ್ರೀರಾಮಚಂದ್ರನಿತ್ತ ಮುದ್ರೆಯನ್ನು ಬಾಯಲ್ಲಿಟ್ಟು ನೀನು ಸಮುದ್ರದಮೇಲೆ ಹಾರುತ್ತ ಅದನ್ನು ದಾಟಿದೆ ಅಂದರೆ ಇದರಲ್ಲಿ ಏನು ಆಶ್ಚರ್ಯವಿಲ್ಲ)

ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ |20|

(ಪ್ರಪಂಚದಲ್ಲಿ ದುರ್ಗಮವೆನಿಸುವ ಎಷ್ಟೆಲ್ಲಾ ಕಾರ್ಯಗಳು ಇವೆಯೋ ಅವೆಲ್ಲ ನಿನ್ನ ಅನುಗ್ರಹವಾದ ಕಾರಣ ಸುಲಭವೆನಿಸುತ್ತವೆ)

ಹನುಮಾನ್ ಚಾಲೀಸಾ
ಹನುಮಾನ್ ಚಾಲೀಸಾ

ರಾಮ ದುಆರೇ ತುಮ ರಖವಾರೇ |
ಹೋತ ನ ಆಜ್ಞಾ ಬಿನು ಪೈಸಾರೇ |21|

(ನೀನು ರಾಮನ ಮನೆಯ ಬಾಗಿಲನ್ನು ಕಾಯುವವನು ನಿನ್ನ ಅನುಮತಿಯಿಲ್ಲದೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ)

ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರ ನಾ |22|

(ನಿನ್ನಲಿ ಶರಣು ಬಂದವರಿಗೆ ಸಕಲ ಸುಖಗಳು ಲಭಿಸುತ್ತವೆ. ನೈನ್ ರಕ್ಷಕನಾದರೆ ಯಾರಿಗೂ ಭಯ ಪಡಬೇಕಾದುದ್ದಿಲ್ಲ )

ಆಪನ ತೇಜ ತುಮ್ಹಾರೋ ಆಪೈ |
ತೀನೋಂ ಲೋಕ ಹಾಂಕ ತೇ ಕಾಂಪೈ |23|

(ನಿನ್ನ ತೇಜಸ್ಸನ್ನು ನೈನ್ ನಿಗ್ರಹಿಸಿಕೋ ,ನಿನ್ನ ಒಂದು ಗರ್ಜನೆಯಿಂದ ಮೂರೂ ಲೋಕಗಳು ನಡುಗುತ್ತವೆ)

ಭೂತ ಪಿಶಾಚ ನಿಕಟ ನಹಿ ಆವೈ |
ಮಹವೀರ ಜಬ ನಾಮ ಸುನಾವೈ |24|

(ನಿನ್ನನ್ನು ಸ್ಮರಿಸಿದ ಮಾತ್ರದಿಂದ ಭೂತ ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ)

ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ |25|

(ವೀರನಾದ ಹನುಮಂತನೇ ನಿನ್ನ ನಾಮವನ್ನು ನಿರಂತರ ಜಪಿಸುವುದರಿಂದ ಸಕಲ ರೋಗಗಳು ದೂರವಾಗುತ್ತವೆ,ಎಲ್ಲ ಕಷ್ಟಗಳು ಕಳೆಯುತ್ತವೆ )

ಸಂಕಟ ಸೇಂ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ |26|

(ಮಾನಸ ವಾಚಾ ಕರ್ಮಣಾ ಯಾರು ಹನುಮಂತನನ್ನು ಸ್ಮರಿಸುತ್ತಾರೋ ಅವರ ಸಂಕಷ್ಟಗಳು ದೂರ ಮಾಡುತ್ತಾನೆ )

ಸಬ ಪರ ರಾಮ ತಪಸ್ವೀ ರಾಜಾ |
ತಿನಕೇ ಕಾಜ ಸಕಲ ತುಮ ಸಾಜಾ |27|

(ಯಾರೇ ಆಗಲಿ ರಾಮನ ಭಕ್ತರಾದರೆ ಅವರ ಕಾರ್ಯಗಳನ್ನು ನೈನ್ ಸಾಂಗಗೊಳಿಸುತ್ತೀಯೆ)

ಔರ ಮನೋರಧ ಜೋ ಕೋಯಿ ಲಾವೈ |
ತಾಸು ಅಮಿತ ಜೀವನ ಫಲ ಪಾವೈ |28|

(ಇನ್ಯಾವುದೇ ಮನೋರಥವನ್ನು ಹನುಮಂತನಲ್ಲಿ ಹೇಳಿಕೊಂಡರೆ ಅವ್ರಿಗೆ ಜೀವಕ್ನದ ಎಲ್ಲ ಫಲಗಳು ದೊರಕುತ್ತವೆ)

ಚಾರೋ ಯುಗ ಪರಿತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ |29|

(ನಿನ್ನ ಪ್ರತಾಪವು ಚತುರ್ಯುಗಗಳಲ್ಲಿ ಹರಡಿದೆ.ನಿನ್ನ ಯಶೋ ಕೀರ್ತಿಯು ಜಗತ್ಪ್ರಸಿದ್ಧವಾದದ್ದು )

ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ |30|

(ನೀನು ಸಾಧು ಸಂತರ ರಕ್ಷಕನು,ರಾಕ್ಷಸರನ್ನು ಸಂಹರಿಸಿದರಾಮ ಪ್ರಿಯನು )

ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
ಅಸ ವರ ದೀನ್ಹ ಜಾನಕೀ ಮಾತಾ |31|

(ಜಾನಕಿಮಾತೆಯು ನೀನು ಅಷ್ಟ ಸಿದ್ದಿಗಳನ್ನು ನವ ನಿಧಿಗಳನ್ನು ಕೊಡುವವನಾಗು ಎಂದು ವರವನ್ನು ನೀಡಿದಳು)

ರಾಮ ರಸಾಯನ ತುಮ್ಹಾರೇ ಪಾಸಾ |
ಸಾದ ರಹೋ ರಘುಪತಿ ಕೇ ದಾಸಾ |32|

(ರಾಮಭಕ್ತಿ ಎಂಬ ರಾಸಾಯನ ನಿನ್ನ ಬಳಿಯಿದೆ.ನೀನು ಸದಾಕಾಲ ರಘುನಾಥನ ದಾಸನಾಗಿರು)

ತುಮ್ಹರೇ ಭಜನ ರಾಮಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ |33|

(ನಿನ್ನ ಸ್ಮರಣೆ ಮಾಡಿದರೆ ಅಹರಿರಾಮನೇ ನಮಗೆ ಲಭ್ಯವಾಗುತ್ತದೆ. ಜನ್ಮ ಜನ್ಮಾಂತರಗಳ ದುಃಖವನ್ನು ಮರೆಯುತ್ತಾನೆ)

ಅಂತ ಕಾಲ ರಘುವರ ಪುರಜಾಯೀ |
ಜಹಾಂ ಜನ್ಮ ಹರಿಭಕ್ತ ಕಹಾಯೀ |34|

(ಅಂತ್ಯಕಾಲ ಬಂದಾಗ ರಘುನಾಥನ ನಗರಿಯಲ್ಲಿ ಜನ್ಮಿಸಿ ಹರಿಭಕ್ತನೆಂಬ ಕೀರ್ತಿಯನ್ನು ಪಡೆಯುತ್ತಾನೆ)

ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವ ಸುಖ ಕರಯೀ |35|

(ಉಳಿದ್ಯಾವ ದೇವತೆಗಳನ್ನು ಮನಸ್ಸಿಗೆ ತರದೇ , ಹನುಮಂತನ್ನು ಸೇವಿಸಿ ಸಕಲ ಸುಖಗಳನ್ನು ಪಡೆಯುತ್ತಾರೆ)

ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲ ವೀರಾ |36|

(ಮಹಾವೀರನಾದ ಹನುಮಂತನನ್ನು ಸ್ಮರಿಸುವುದರಿಂದ ಎಲ್ಲ ಸಂಕಷ್ಟಗಳು ನೋವುಗಳು ಪರಿಹಾರವಾಗುತ್ತವೆ)

ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರೋ ಗುರುದೇವ ಕೀ ನಾಯೀ |37|

(ಹನುಮಂತ ದೇವರೇ ನಿನಗೆ ಜಯವಾಗಲಿ. ಗುರುದೇವನಂತೆ ನಮ್ಮಲ್ಲಿ ಕೃಪೆಯಿಡು )

ಜೋ ಶತ ವಾರ ಪಾಠ ಕರ ಕೋಯೀ |
ಛೂಟಹಿ ಬಂದಿ ಮಹಾ ಸುಖ ಹೋಯೀ|38|

(ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ ಅವರು ಭವ ಬಂಧನಗಳಿಂದ ಬಿಡುಗಡೆ ಹೊಂದಿ ಮಹಾ ಸುಖವನ್ನು ಪಡೆಯುವರು)

ಜೋ ಯಹ ಪಡೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಶಾ |39|

(ಈ ಸ್ತೋತ್ರ ಹನುಮಾನ ಚಾಲೀಸವನ್ನು ಯಾರು ಪಠಣ ಮಾಡುತ್ತಾರೋ ಅವರಿಗೆ ಸಕಲ ಸಿದ್ದಿಗಳು ಲಭಿಸುತ್ತವೆ ಎಂಬುದಕ್ಕೆ ಶಂಕರನೇ ಸಾಕ್ಷಿ )

ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ |40|

(ಈ ಹನುಮಾನ ಚಾಲೀಸವನ್ನು ರಚಿಸಿದ ಹರಿಯ ದಾಸರಾದ ತುಲಸೀದಾಸರು ಎಲೈ ಸ್ವಾಮಿಯೇ ಸದಾ ನನ್ನ ಹೃದಯದಲ್ಲಿ ನೆಲೆಸು ಎಂದು ಪ್ರಾರ್ಥಿಸುತ್ತಾರೆ )

॥ ದೋಹಾ ॥
ಪವನ ತನಯ ಸಂಕಟ ಹರಣ – ಮಂಗಳ ಮೂರತಿ ರೂಪ್ |
ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್.
ಸಿಯಾವರ ರಾಮಚಂದ್ರಕೀ ಜಯ | ಪವನಸುತ ಹನುಮಾನಕೀ ಜಯ | ಬೋಲೋ ಭಾಯೀ ಸಬ ಸಂತನಕೀ ಜಯ |
(ವಾಯುಪುತ್ರನೇ ಸಂಕಟ ಮೋಚಕನೇ ಮಂಗಳಮಯ ರೂಪ ಹೊಂದಿದ ಮೂರ್ತಿಯೇ ರಾಮಲಕ್ಷ್ಮಣ ಸಮೇತನಾಗಿ ನನ್ನ ಹೃದಯದಲ್ಲಿ ನೆಲೆಸು)

Hanuman Chalisa in kannada pdf – ಹನುಮಾನ್ ಚಾಲೀಸಾ pdf

ಹನುಮಾನ್ ಚಾಲೀಸಾ pdf download ಮಾಡಲು ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

Hanuman chalisa in kannada pdf
Hanuman chalisa in kannada pdf

ಹನುಮಾನ್ ಚಾಲೀಸಾ pdf download

ಹನುಮಾನ್ ಚಾಲೀಸಾ ಮಹತ್ವ – Hanuman Chalisa in Kannada

ಹಿಂದೂ ಪದ್ದತಿಯಲ್ಲಿ ಹಿರಿಯರ ಪ್ರಕಾರ ಹನುಮಾನ್ ಚಾಲೀಸಾ ಎಲ್ಲರ ಜೀವನದಲ್ಲಿ ಒಂದು ನಂಬಿಕೆಯಾಗಿದೆ ಮತ್ತು ಹನುಮಾನ್ ಚಾಲೀಸಾವನ್ನು ದಿನನಿತ್ಯ ಪಠಿಸೋದರಿಂದ ಜೀವನದ ಕಷ್ಟ ಮತ್ತು ಆರ್ಥಿಕ ಸಮಸ್ಯೆಗಳು (Financial Crisis) ದೂರವಾಗುತ್ತೆ ಎಂದು ನಂಬಲಾಗಿದೆ.

ಅದಲ್ಲದೆ ವ್ಯಕ್ತಿಯ ಭಾವನೆಗಳ್ಳನ್ನು (Feelings) ಜಾಗೃತಗೊಳಿಸುತ್ತೆ. ಹಾಗೂ, ಹನುಮಾನ್ ಚಾಲೀಸಾದ ಪಠಣವು ಮೋಕ್ಷ ಪಡೆಯಲು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ, ಒಬ್ಬ ವ್ಯಕ್ತಿ ಜ್ಞಾನ ಹೆಚ್ಚಳಗೊಳ್ಳಲು ಉಪಾಯಯುಕ್ತವಾಗಿದೆ ಎಂದು ನಂಬಲಾಗಿದೆ

Leave a Comment